*ಬೆಂಗಳೂರು:* ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್. ನಾರಾಯಣ ಮೂರ್ತಿ ಇತ್ತೀಚೆಗೆ ಭಾರತೀಯರು ವಾರಕ್ಕೆ 70 ಗಂಟೆಗಳವರೆಗೆ ಕೆಲಸ ಮಾಡಿ ದೇಶದ ಬೆಳವಣಿಗೆಗೆ ಉತ್ತೇಜನ ನೀಡಬೇಕು ಎಂದು ಹೇಳುವ ಮೂಲಕ ಸುದ್ದಿಯಲ್ಲಿದ್ದರು. ಈಗ ವೇತನ ಹೆಚ್ಚಳದ ವಿಷಯದಲ್ಲಿ ನಾರಾಯಣ ಮೂರ್ತಿ ಅವರ ಸಂಸ್ಥೆ ಇನ್ಫೋಸಿಸ್ ಸುದ್ದಿಯಲ್ಲಿದೆ. ವೇತನ ಹೆಚ್ಚಳದ ವಿಷಯದಲ್ಲಿ ಇನ್ಫೋಸಿಸ್ ನೌಕರರಿಗೆ ದೊಡ್ಡ ಹಿನ್ನಡೆಯಾಗಿರುವುದು ಸುದ್ದಿಯ ಸಾರಾಂಶ. ಇನ್ಫೋಸಿಸ್ 2024-25ರ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದವರೆಗೆ ತನ್ನ ಉದ್ಯೋಗಿಗಳಿಗೆ ವೇತನ ಹೆಚ್ಚಳವನ್ನು ವಿಳಂಬಗೊಳಿಸಲು ನಿರ್ಧರಿಸಿದೆ. ಇದು ವರ್ಷದ ಆರಂಭದಲ್ಲಿ ವೇತನ ಹೆಚ್ಚಳವನ್ನು ಜಾರಿಗೆ ತರುವ ಸಾಂಪ್ರದಾಯಿಕ ಅಭ್ಯಾಸದಿಂದ ವಿಮುಖವಾಗಿದೆ ಎಂದು ಮಾಧ್ಯಮ ವರದಿಗಳು ವಿಶ್ಲೇಷಿಸಿವೆ. ಜಾಗತಿಕ ಆರ್ಥಿಕ ಅನಿಶ್ಚಿತತೆ ಮತ್ತು ಐಟಿ ಬೇಡಿಕೆಯಲ್ಲಿನ ನಿಧಾನಗತಿಯ ಕಾರಣದಿಂದ ಸಂಸ್ಥೆ ವೇತನ ಹೆಚ್ಚಳ ವಿಳಂಬ ಕ್ರಮ ಕೈಗೊಂಡಿದೆ ಎಂದು ಹೇಳಲಾಗುತ್ತಿದೆ. ಮಾಧ್ಯಮ ವರದಿಗಳ ಪ್ರಕಾರ, ವೇತನ ಹೆಚ್ಚಳವನ್ನು ವಿಳಂಬ ಮಾಡುವುದರಿಂದ ಉದ್ಯೋಗಿಗಳ ವಜಾ ದರಗಳು ಹೆಚ್ಚಾಗಬಹುದು, ಮತ್ತೊಂದೆಡೆ ವೇತನ ಹೆಚ್ಚಳ ಮಾಡಿದರೆ ಸಂಸ್ಥೆಯ ಲಾಭದಾಯಕತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದಾಗಿದ್ದು ಸಂಸ್ಥೆ ಸಂದಿಗ್ಧ ಪರಿಸ್ಥಿತಿ ಎದುರಿಸುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
0 Comments