Ticker

6/recent/ticker-posts

Ad Code

Responsive Advertisement

*ಭಾರತದಲ್ಲಿ ಐಸ್ ಕ್ರೀಮ್ ಮಾರುತಿದ್ದಾರೆ ಪಾಕಿಸ್ತಾನದ ಮಾಜಿ ಸಂಸದ !! ಕಾರಣ ನಿಜಕ್ಕೂ ಅಚ್ಚರಿ***


ಪಹಲ್ಗಾಂ ಅಟ್ಯಾಕ್ ಬಳಿಕ ಕೇಂದ್ರ ಸರ್ಕಾರವು ಭಾರತದಲ್ಲಿರುವ ಪಾಕಿಸ್ತಾನ ಪ್ರಜೆಗಳು 48 ಗಂಟೆಗಳ ಒಳಗಡೆ ಭಾರತವನ್ನು ಬಿಡಬೇಕು ಎಂದು ಆದೇಶಿಸಿದೆ. ಜೊತೆಗೆ ಪ್ರತಿ ರಾಜ್ಯದ ಮುಖ್ಯಮಂತ್ರಿಗಳಿಗೆ ಈ ಕುರಿತು ಸೂಚನೆಯನ್ನು ನೀಡಿತ್ತು. ಅಂತೇ ಪ್ರತೀ ರಾಜ್ಯದಲ್ಲೂ ಇದ್ದ ಹಲವು ಪಾಕಿಸ್ತಾನಿಯರನ್ನು ಭಾರತವು ಗಡಿಪಾರು ಮಾಡಿತ್ತು. ಆದರೆ ಆದರೆ ಪಾಕಿಸ್ತಾನದ ಮಾಜಿ ಸಂಸದ ಡಬಾಯಾ ರಾಮ್ ಭಾರತದಲ್ಲಿಯೇ ಉಳಿದು ಐಸ್‌ಕ್ರೀಮ್‌ ಮಾರುತ್ತಿದ್ದಾರೆ. ಪಾಕಿಸ್ತಾನದಲ್ಲಿ ರಾಜಕೀಯ, ಆಸ್ತಿಪಾಸ್ತಿ ಬಿಟ್ಟು ಭಾರತದಲ್ಲಿ ಏಕೆ ವಾಸಿಸುತ್ತಿದ್ದಾರೆ? ಅವರು ಐಸ್ ಕ್ರೀಮ್ ಮಾರುತ್ತಿರುವುದು ಏಕೆ? ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ಸ್ಟೋರಿ. ಪಾಕಿಸ್ತಾನಿ ಡಬಾಯಾ ರಾಮ್ ಎಂಬ ವ್ಯಕ್ತಿಯೇ ಭಾರತದಲ್ಲಿ ಐಸ್ ಕ್ರೀಮ್ ಮಾರುತ್ತಿರುವ ಪಾಕಿಸ್ತಾನದ ಮಾಜಿ ಸಂಸದರು. ಇವರು 1989 ರಲ್ಲಿ ಬೆನಜೀರ್ ಭುಟ್ಟೋ ಪ್ರಧಾನಮಂತ್ರಿಯಾಗಿದ್ದ ಆಡಳಿತದ ಅವಧಿಯಲ್ಲಿ ಅವರು ಸಂಸದರಾಗಿ ಗೆದ್ದರು. ಆದರೆ, ಸಾರ್ವಜನಿಕ ಪ್ರತಿನಿಧಿಯಾಗಿದ್ದರೂ, ಅವರು ಅಲ್ಪಸಂಖ್ಯಾತ ಸಮುದಾಯಕ್ಕೆ (ಹಿಂದೂ) ಸೇರಿದವರಾಗಿದ್ದರಿಂದ ಪಾಕಿಸ್ತಾನದಲ್ಲಿ ಅವರಿಗೆ ರಕ್ಷಣೆ ಇಲ್ಲದಂತಾಗಿತ್ತು. ಇವರು ಸಂಸದರಾಗಿದ್ದಾಗಲೇ ಇವರ ಮಗಳನ್ನು ಅಪಹರಿಸಿದರು ಕೂಡ ಇವರಿಂದ ಏನು ಮಾಡಲಾಗಲಿಲ್ಲ. ಪ್ರಭಾವಿ ರಾಜಕೀಯ ನಾಯಕನಾಗಿದ್ದರು ಕೂಡ ತಮ್ಮ ಕುಟುಂಬವನ್ನು ಪೋಷಿಸಲು ಅವರಿಂದ ಸಾಧ್ಯವಾಗಲಿಲ್ಲ. ಇದರ ಪರಿಣಾಮವಾಗಿ, ಅವರು 2000ರಲ್ಲಿ ಪಾಕಿಸ್ತಾನವನ್ನು ತೊರೆದು ಭಾರತಕ್ಕೆ ವಲಸೆ ಬರಲು ತೀರ್ಮಾನಿಸಿದರು.ಹೀಗೆ ದಬಯಾ ರಾಮ್ ತಮ್ಮ ಪತ್ನಿ ರಾಜೋ ರಾಣಿ, 8 ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳೊಂದಿಗೆ ಪ್ರವಾಸಿ ವೀಸಾದಲ್ಲಿ ಭಾರತಕ್ಕೆ ಬಂದರು. ಹರಿಯಾಣದ ರೋಹ್ಟಕ್‌ನಿಂದ ಈ ಕುಟುಂಬವು 2008ರಲ್ಲಿ ಫತೇಹಾಬಾದ್‌ನ ರತನ್‌ಗಢಕ್ಕೆ ಸ್ಥಳಾಂತರಗೊಂಡಿತು. ಪಾಕಿಸ್ತಾನದ ಮಾಜಿ ಸಂಸದರ ಕುಟುಂಬವು ಕಳೆದ 25 ವರ್ಷಗಳಿಂದ ಭಾರತದಲ್ಲಿ ವಾಸಿಸುತ್ತಿದೆ. ಪ್ರಸ್ತುತ, ಅವರ ಕುಟುಂಬದಲ್ಲಿ 30 ಸದಸ್ಯರಿದ್ದಾರೆ. ಪಾಕಿಸ್ತಾನದ ಮಾಜಿ ಸಂಸದ ಡಬಾಯ್ ರಾಮ್ ಐಸ್ ಕ್ರೀಮ್ ಮಾರಾಟ ಮಾಡುವ ಮೂಲಕ ತಮ್ಮ ಕುಟುಂಬವನ್ನು ಪೋಷಿಸುತ್ತಾರೆ. ಪಾಕಿಸ್ತಾನದಲ್ಲಿ ಒಳ್ಳೆಯ ಮನೆಗಳು ಮತ್ತು 25 ಎಕರೆ ತೋಟವಿದ್ದರೂ, ಅವರು ಅಲ್ಲಿಗೆ ಹಿಂತಿರುಗಿ ಹೋಗಲಿಲ್ಲ. ಈಗಾಗಲೇ ದಬಯಾ ರಾಮ್ ಅವರ ಕುಟುಂಬದ ಇಬ್ಬರು ಮಹಿಳೆಯರು ಸೇರಿದಂತೆ 6 ಜನರಿಗೆ ಭಾರತೀಯ ಪೌರತ್ವ ನೀಡಲಾಗಿದೆ. ಉಳಿದವರನ್ನು ಭಾರತೀಯರೆಂದು ಗುರುತಿಸಿ ಪೌರತ್ವ ನೀಡಬೇಕೆಂದು ಅವರು ಒತ್ತಾಯಿಸುತ್ತಿದ್ದಾರೆ. ಈಗಾಗಲೇ ಭಾರತೀಯ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಅದು ಪ್ರಕ್ರಿಯೆಯಲ್ಲಿದೆ ಎಂದು ಹೇಳುತ್ತಾರೆ. ಅಲ್ಲದೆ ಭಾರತೀಯರು ದಯಾಳುಗಳು… ಪಾಕಿಸ್ತಾನದಿಂದ ಬಂದಿದ್ದರೂ ನಮಗೆ ಆಶ್ರಯ ಮತ್ತು ಬೆಂಬಲ ನೀಡುತ್ತಿದ್ದಾರೆ. ಇಲ್ಲಿನ ಸ್ಥಳೀಯ ಆಡಳಿತಗಾರರು ಸಹ ತಮ್ಮ ಬೆಂಬಲಕ್ಕೆ ನಿಂತರು. ಅದಕ್ಕಾಗಿಯೇ ನಮ್ಮ ಕುಟುಂಬವು ಶಾಂತಿಯುತವಾಗಿ ಬದುಕಲು ಸಾಧ್ಯವಾಗಿದೆ ಎಂದು ಸಂತೋಷಪಡುತ್ತಾರೆ.
      ಯೋಗೇಶ್ ಶಿರೂರು

Post a Comment

0 Comments