*ಬೆಂಗಳೂರು:* ಕರಾವಳಿ ಪ್ರಾಂತ್ಯದಲ್ಲಿ ನಡೆಯುತ್ತಿರುವ ಘಟನಾವಳಿಗಳನ್ನು ಸರ್ಕಾರ ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದೆ, ಅ ಭಾಗದಲ್ಲಿ ಶಾಂತಿ ಕದಡುವ ಜನ ಯಾರೇ ಆಗಿರಲಿ, ಸರ್ಕಾರ ಸುಮ್ಮನೆ ಬಿಡಲ್ಲ, ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದರು. ಕರಾವಳಿ ಭಾಗದಲ್ಲಿ ಹತ್ಯೆಗಳು ಹೆಚ್ಚಾಗುತ್ತಿರುವುದರಿಂದ ಅನಿವಾರ್ಯವಾಗಿ ದಕ್ಷಣ ಕನ್ನಡ ಜಿಲ್ಲೆಯ ಪೊಲೀಸ್ ಕಮೀಶನರ್, ಅಲ್ಲಿನ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಉಡುಪಿಯ ಎಸ್ಪಿಯನ್ನು ವರ್ಗಾವಣೆಯನ್ನು ಮಾಡಲಾಗಿದೆ, ದಕ್ಷಿಣ ಕನ್ನಡ ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ರಾಜ್ಯಕ್ಕೆ ಬಹಳ ಮುಖ್ಯವಾದ ಜಿಲ್ಲೆಯಾಗಿದೆ, ಹಾಗಾಗಿ ಅಲ್ಲಿ ಶಾಂತಿ ನೆಲಸುವುದು ಜನ ಸೌಹಾರ್ದತೆಯಿಂದ ಬಾಳುವುದು ಅತ್ಯಂತ ಅವಶ್ಯಕವಾಗಿದೆ ಎಂದು ಗೃಹ ಸಚಿವ ಹೇಳಿದರು.
0 Comments