Ticker

6/recent/ticker-posts

Ad Code

Responsive Advertisement

*ಮನುಷ್ಯರನ್ನು ಕೊಂದು, ರಕ್ತ ಕುಡಿದು, ಮೆದುಳು ತಿನ್ನುತ್ತಿದ್ದ ನರಭಕ್ಷಕ ರಾಜನಿಗೆ ಜೀವಾವಧಿ ಶಿಕ್ಷೆ*****


 *ಲಕ್ನೋ:* ಮನುಷ್ಯರನ್ನು ಕೊಂದು ರಕ್ತ ಕುಡಿದು, ಮೆದುಳು ತಿನ್ನುತ್ತಿದ್ದ ಹಂತಕ ರಾಮ್ ನಿರಂಜನ್ ಕೋಲ್ ಅಲಿಯಾಸ್ ರಾಜಾ ಕೋಲಂದರ್​ಗೆ ಲಕ್ನೋ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. 2000ರಲ್ಲಿ ನಡೆದ ಜೋಡಿ ಕೊಲೆ(Murder)  ಪ್ರಕರಣದಲ್ಲಿ ಲಕ್ನೋ ನ್ಯಾಯಾಲಯವ ಜೀವಾವಧಿ ಶಿಕ್ಷೆ ಹಾಗೂ 1 ಲಕ್ಷ ರೂ. ದಂಡವನ್ನು ವಿಧಿಸಿದೆ. 2000 ರಲ್ಲಿ ನಡೆದ ಪತ್ರಕರ್ತ ಮನೋಜ್ ಸಿಂಗ್ ಮತ್ತು ಅವರ ಚಾಲಕ ರವಿ ಶ್ರೀವಾಸ್ತವ್ ಅವರ ಕೊಲೆಗೆ ಸಂಬಂಧಿಸಿದಂತೆ ಆರೋಪಿಯನ್ನು ದೋಷಿ ಎಂದು ಘೋಷಿಸಿದ್ದಾರೆ, ಆದರೆ ಆರೋಪಿ ಮುಖದಲ್ಲಿ ಯಾವುದೇ ಪಶ್ಚಾತಾಪ ಕಾಣಿಸಲಿಲ್ಲ ಬದಲಾಗಿ, ಕುಹಕ ನಗು ಇತ್ತು. ರಾಜ ಕೊಲಂದರ್ 14 ಜನರನ್ನು ಕೊಂದ ಆರೋಪ ಹೊತ್ತಿದ್ದಾನೆ. ಲಕ್ನೋದ ಸಿಜೆಎಂ ನ್ಯಾಯಾಲಯ ಶುಕ್ರವಾರ ರಾಜಾ ಕೊಲಂದರ್ ಮತ್ತು ಅವರ ಸೋದರ ಮಾವ ವಕ್ಷರಾಜ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಇಬ್ಬರನ್ನೂ ಲಕ್ನೋದಿಂದ ಟ್ಯಾಕ್ಸಿಯಲ್ಲಿ ರಾಯ್ ಬರೇಲಿಗೆ ಕರೆದೊಯ್ದು ಕಾಡಿನಲ್ಲಿ ಕೊಲೆ ಮಾಡಲಾಗಿತ್ತು. ಕೆಲವು ದಿನಗಳ ನಂತರ ಬರ್ಗಢ ಕಾಡಿನಲ್ಲಿ ಅವರ ಬೆತ್ತಲೆ ಶವಗಳು ಪತ್ತೆಯಾಗಿದ್ದವು. ರಾಜಾ ಕುಲಂದರ್ ಪ್ರಯಾಗರಾಜ್‌ನ ನೈನಿ ಪ್ರದೇಶದ ನಿವಾಸಿ. 2000 ಇಸವಿಯಲ್ಲಿ ಪತ್ರಕರ್ತ ಧೀರೇಂದ್ರ ಸಿಂಗ್ ಅವರ ಹತ್ಯೆಯ ತನಿಖೆ ನಡೆಸಿದಾಗ, ಅವರ ಮನೆಯಿಂದ ಹಲವಾರು ಅಸ್ಥಿಪಂಜರಗಳು ಮತ್ತು ಮಾನವ ತಲೆಬುರುಡೆಗಳು ಪತ್ತೆಯಾಗಿದ್ದವು. ತನಿಖೆಯಲ್ಲಿ ಅವನು ತನ್ನ ಮಾನಸಿಕ ಶಕ್ತಿಯನ್ನು ಹೆಚ್ಚಿಸಲು ತಲೆಬುರುಡೆಗಳನ್ನು ಕುದಿಸಿ ಅದರ ಸೂಪ್ ಕುಡಿಯುತ್ತಿದ್ದನು ಎಂದು ತಿಳಿದುಬಂದಿದೆ. ಕೊಲೆಯ ನಂತರ ಲೂಟಿ ಮಾಡಲಾದ ಟಾಟಾ ಸುಮೋವನ್ನು ಅವರು ತಮ್ಮ ಪತ್ನಿ ಫೂಲನ್ ದೇವಿಯವರ ಜಿಲ್ಲಾ ಪಂಚಾಯತ್ ಚುನಾವಣಾ ಪ್ರಚಾರದ ಸಮಯದಲ್ಲಿಯೂ ಬಳಸಿದ್ದ, ರಾಜಾಗೆ ಅದಾಲತ್ ಮತ್ತು ಜಮಾನತ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಕುಟುಂಬವು ಅವನನ್ನು ನಿರಪರಾಧಿ ಎಂದು ಪರಿಗಣಿಸುತ್ತದೆ ಆದರೆ ಆತ ವಾಸವಿರುವ ಪ್ರದೇಶದ ಜನರು ಆತನ ಹೆಸರನ್ನು ಕೇಳಿದರೆ ಇನ್ನೂ ನಡುಗುತ್ತಾರೆ. ಪತ್ರಕರ್ತ ಧೀರೇಂದ್ರ ಸಿಂಗ್ ಅವರ ಕುಟುಂಬವು ನ್ಯಾಯಾಲಯದ ತೀರ್ಪಿನಿಂದ ತೃಪ್ತರಾಗಿದ್ದರೂ, ಸಂಪೂರ್ಣ ನ್ಯಾಯ ಇನ್ನೂ ಸಿಕ್ಕಿಲ್ಲ ಎಂದು ಅವರು ಹೇಳುತ್ತಾರೆ.

Post a Comment

0 Comments