Ticker

6/recent/ticker-posts

Ad Code

Responsive Advertisement

*‘ಸರಿಗಮಪ’ ಗೆಲುವಿನ ಬಳಿಕೆ ಮರೆಯದೇ ಪುನೀತ್ ಸಮಾಧಿಗೆ ಭೇಟಿ ನೀಡಿದ ಶಿವಾನಿ**


ಇತ್ತೀಚೆಗೆ ಜೀ ಕನ್ನಡದ ‘ಸರಿಗಮಪ ಸೀಸನ್ 21’ರ ಫಿನಾಲೆ ನಡೆಯಿತು. ಎಲ್ಲರನ್ನು ಹಿಂದಿಕ್ಕಿ ಬೀದರನ್ ಶಿವಾನಿ ಅವರು ವಿನ್ನರ್ ಆದರು. ಹೆಚ್ಚು ವೋಟ್ ಪಡೆದು ಅವರು ಗೆಲುವಿನ ನಗು ಬೀರಿದರು. ಆ ಬಳಿಕ ಅವರು ಅಪ್ಪು ಸಮಾಧಿಗೆ ಭೇಟಿ ನೀಡಿ ನಮನ ಸಲ್ಲಿಸಿದ್ದಾರೆ.ಪುನೀತ್ ರಾಜ್​ಕುಮಾರ್ ಎಂದರೆ ಅನೇಕರಿಗೆ ಅಚ್ಚುಮೆಚ್ಚು. ಅವರು ಕೇವಲ ಉತ್ತಮ ನಟ ಮಾತ್ರ ಆಗಿರಲಿಲ್ಲ. ಅವರು ಒಳ್ಳೆಯ ಗಾಯಕರು ಕೂಡ ಆಗಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಅವರು ಹೃದಯವಂತ ವ್ಯಕ್ತಿ ಆಗಿದ್ದರು. ಈ ಕಾರಣದಿಂದಲೇ ಅವರಿಗೆ ಅಷ್ಟೊಂದು ಅಭಿಮಾನಿಗಳು ಇದ್ದರು.ಪುನೀತ್ ಸಮಾಧಿ ಬಳಿಯೇ ರಾಜ್​ಕುಮಾರ್ ಸಮಾಧಿ ಕೂಡ ಇದೆ. ಹೀಗಾಗಿ, ಶಿವಾನಿ ಅವರು ತಂದೆ ತಾಯಿ ಜೊತೆ ಅಲ್ಲಿಗೆ ಭೇಟಿ ನೀಡಿದ್ದಾರೆ. ರಾಜ್​ಕುಮಾರ್ ಕೂಡ ತಮ್ಮ ಅದ್ಭುತ ಕಂಠದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಶಿವಾನಿ ಅವರು ಮೊದಲಿನಿಂದಲೂ ತಮ್ಮ ಗಾಯನದ ಮೂಲಕ ಜನಮನ ಗೆದ್ದರು. ಅವರು ಉತ್ತರ ಕರ್ನಾಟಕದವರು. ಹೀಗಾಗಿ, ಅಲ್ಲಿಯವರು ಹೆಚ್ಚಿನ ಸಂಖ್ಯೆಯಲ್ಲಿ ಗಾಯಕಿಗೆ ವೋಟ್ ಮಾಡಿ ಅವರನ್ನು ಗೆಲ್ಲಿಸಿದ್ದಾರೆ. ಅವರ ಗೆಲುವಿಗೆ ಕೆಲವರು ಅಪಸ್ವರ ತೆಗೆದಿದ್ದೂ ಇದೆ. ಪುನೀತ್ ರಾಜ್​ಕುಮಾರ್ ಅವರು ನಮ್ಮನ್ನು ಅಗಲಿ ಕೆಲವು ವರ್ಷಗಳು ಕಳೆದಿವೆ. ಆದರೆ, ಅವರಿಲ್ಲ ಎನ್ನುವ ನೋವು ಎಂದಿಗೂ ಮರೆ ಆಗುವಂಥದ್ದಲ್ಲ. ಅವರು ಇನ್ನೂ ನಮ್ಮ ಜೊತೆ ಇರಬೇಕಿತ್ತು ಎಂದು ಅನೇಕರು ಈಗಲೂ ಅಂದುಕೊಳ್ಳುತ್ತಾರೆ.

Post a Comment

0 Comments