Ticker

6/recent/ticker-posts

Ad Code

Responsive Advertisement

*ನಟಿ ಸೌಂದರ್ಯ ಸಾವಿಗೆ ಮೋಹನ್​ ಬಾಬು ಕಾರಣ, ದೂರು ನೀಡಿದ ವ್ಯಕ್ತಿ*


ತೆಲುಗು ಚಿತ್ರರಂಗದ ದಿಗ್ಗಜ ನಟ ಮೋಹನ್ ಬಾಬುಗೆ ಟೈಮ್ ಸರಿ ಇದ್ದಂತಿಲ್ಲ. ಒಂದರ ಹಿಂದೊಂದು ವಿವಾದಗಳು ಮೋಹನ್ ಬಾಬು ಕೊರಳನ್ನು ಸುತ್ತಿಕೊಳ್ಳುತ್ತಿವೆ. ಮೋಹನ್ ಬಾಬು ಮಕ್ಕಳ ಆಸ್ತಿ ವಿವಾದ ಬೀದಿಗೆ ಬಂದು ಬಹಳ ಸಮಯವಾಗಿದೆ. ಸ್ವಂತ ಮಗನೇ ಮೋಹನ್ ಬಾಬು ವಿರುದ್ಧ ದೂರು ದಾಖಲಿಸಿದ್ದಾರೆ. ಇದರ ನಡುವೆ ಪತ್ರಕರ್ತರ ಮೇಲೆ ಹಲ್ಲೆ ಮಾಡಿದ ಪ್ರಕರಣವೂ ಮೋಹನ್ ಬಾಬು ವಿರುದ್ಧ ದಾಖಲಾಗಿದ್ದು, ಪ್ರಕರಣದ ವಿಚಾರಣೆ ಚಾಲ್ತಿಯಲ್ಲಿದೆ. ಇದೆಲ್ಲದರ ನಡುವೆ ಇದೀಗ ಮೋಹನ್ ಬಾಬು ವಿರುದ್ಧ ಮತ್ತೊಂದು ದೂರು ದಾಖಲಾಗಿದೆ. ಖ್ಯಾತ ನಟಿ ಸೌಂದರ್ಯ ಸಾವಿಗೆ ಮೋಹನ್ ಬಾಬು ಕಾರಣ ಎಂದು ಆರೋಪಿಸಿ ವ್ಯಕ್ತಿಯೊಬ್ಬ ದೂರು ನೀಡಿದ್ದಾನೆ. ಖಮ್ಮಂ ಜಿಲ್ಲೆ, ಸತ್ಯನಾರಾಯಣಪುರ ಗ್ರಾಮದ ಎದುರುಗಟ್ಲ ಚಿಟ್ಟಿಬಾಬು ಹೆಸರಿನ ವ್ಯಕ್ತಿಯೊಬ್ಬ, ಮೋಹನ್ ಬಾಬು ವಿರುದ್ಧ ದೂರು ನೀಡಿದ್ದು, ಸೌಂದರ್ಯ ಸಾವಿಗೆ ಮೋಹನ್ ಬಾಬು ಕಾರಣ ಎಂದಿದ್ದಾರೆ. ಅಲ್ಲದೆ ಇದೀಗ ತಮ್ಮ ಜೀವಕ್ಕೆ ಸಹ ಮೋಹನ್ ಬಾಬು ಇಂದ ಬೆದರಿಕೆ ಇದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಮೋಹನ್ ಬಾಬು ವಾಸವಾಗಿರುವ ಹೈದರಾಬಾದ್​ನ ಜಲಪಲ್ಲಿ ಬಳಿಯ ಟೌನ್​ಶಿಪ್​ ಸೌಂದರ್ಯಾಗೆ ಸೇರಿದ್ದು, ಅಲ್ಲಿಂದ ಮೋಹನ್ ಬಾಬು ಅನ್ನು ಖಾಲಿ ಮಾಡಿಸಬೇಕು ಎಂದು ಮನವಿ ಮಾಡಿದ್ದಾರೆ ಚಿಟ್ಟಿಬಾಬು.ದೂರಿನಲ್ಲಿ ಉಲ್ಲೇಖಿಸಿರುವಂತೆ, ಸೌಂದರ್ಯ ನಿಧನ ಹೊಂದಿದಾಗ ಮೋಹನ್ ಬಾಬು ಜೊತೆಗೆ ಶಿವ ಶಂಕರ ಸಿನಿಮಾದಲ್ಲಿ ನಟಿಸುತ್ತಿದ್ದರು. ಅದೇ ಸಮಯದಲ್ಲಿ ಅವರು ಶಂಷಾಬಾದ್​ನ ಜಲ್ಪಲ್ಲಿ ಗ್ರಾಮದ ಬಳಿ ಆರು ಎಕರೆ ಜಮೀನು ಖರೀದಿ ಮಾಡಿದ್ದರು. ಆ ವಿಷಯವನ್ನು ಮೋಹನ್ ಬಾಬು ಬಳಿ ಸೌಂದರ್ಯ ಹೇಳಿಕೊಂಡಿದ್ದರು. ಆಗ ಮೋಹನ್ ಬಾಬು ಕಣ್ಣು ಆ ಆರು ಎಕರೆ ಜಮೀನಿನ ಮೇಲೆ ಬಿತ್ತು. ಮೋಹನ್ ಬಾಬು, ಆ ಜಮೀನನ್ನು ಸೌಂದರ್ಯ ಇಂದ ಖರೀದಿ ಮಾಡುವ ಪ್ರಯತ್ನ ಮಾಡಿದರು. ಅದಕ್ಕೆ ಸೌಂದರ್ಯ ಮತ್ತು ಅವರ ಅಣ್ಣ ಒಪ್ಪಲಿಲ್ಲ. ಹೀಗಾಗಿ ಮೋಹನ್ ಬಾಬು ಉಪಾಯವಾಗಿ ಸೌಂದರ್ಯ ಅವರನ್ನು ಹತ್ಯೆ ಮಾಡಿಸಿದ್ದಾರೆ. ಅದಾದ ಬಳಿಕ ಆ ಆರು ಎಕರೆ ಜಾಗವನ್ನು ಮೋಹನ್ ಬಾಬು ಅಕ್ರಮವಾಗಿ ತನ್ನ ಹೆಸರಿಗೆ ಮಾಡಿಕೊಂಡಿದ್ದಾರೆ ಎಂದು ಎದುರುಗಟ್ಲ ಚಿಟ್ಟಿಬಾಬು ಆರೋಪಿಸಿದ್ದಾರೆ.

Post a Comment

0 Comments