*ಬೆಂಗಳೂರು:* ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ನಟಿ ರನ್ಯಾ ರಾವ್ (Ranya Rao) ಸದ್ಯ ನಾಯಾಂಗ ಬಂಧನದಲ್ಲಿದ್ದಾರೆ. ಅಷ್ಟಕ್ಕೂ ನಟಿ ರನ್ಯಾ ರಾವ್ ಡಿಐಆರ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದು ಹೇಗೆ? ಎಂಬ ಪ್ರಶ್ನೆ ಉದ್ಭವಾಗಿದೆ. ನಟಿ ರನ್ಯಾ ರಾವ್ ಹೆಚ್ಚು ವಿದೇಶ ಪ್ರಯಾಣ ಮಾಡುತ್ತಿದ್ದರು. ಮದುವೆಯಾದ ನಂತರವೂ ತಮ್ಮ ವಿದೇಶ ಪ್ರಯಾಣವನ್ನು ಮುಂದುವರೆಸಿದ್ದರು.ಮದುವೆಯಾದ ಎರಡೇ ತಿಂಗಳಿಗೆ ನಟಿ ರನ್ಯಾ ರಾವ್ ವಿದೇಶಕ್ಕೆ ತೆರಳಿದ್ದರು. ಇದು, ಸಂಸಾರದಲ್ಲಿ ಬಿರುಕು ಮೂಡಲು ಕಾರಣವಾಗಿತ್ತಂತೆ. ರನ್ಯಾ ರಾವ್ ಪದೇ ಪದೆ ವಿದೇಶಕ್ಕೆ ಪ್ರಯಾಣ ಮಾಡುವ ವಿಚಾರವಾಗಿ ಪತಿ-ಪತ್ನಿ ನಡುವೆ ಜಗಳವಾಗಿದ್ದು, ವಿಚ್ಛೇದನ ಹಂತಕ್ಕೂ ತಲುಪಿತ್ತಂತೆ. ಈ ಹಿನ್ನೆಲೆಯಲ್ಲಿ ಚಿನ್ನ ಕಳ್ಳಸಾಗಾಣಿಕೆ ಬಗ್ಗೆ ಸ್ವತಃ ರನ್ಯಾ ರಾವ್ ಪತಿಯೇ ಡಿಆರ್ಐ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ. ನಟಿ ರನ್ಯಾ ರಾವ್ ಹೆಚ್ಚು ಹೆಚ್ಚು ವಿದೇಶ ಪ್ರಯಾಣ ಮಾಡುತ್ತಿದ್ದರು. ಇದು, ಡಿಐಆರ್ ಅಧಿಕಾರಿಗಳಲ್ಲಿ ಅನುಮಾನ ಹುಟ್ಟುವಂತೆ ಮಾಡಿತ್ತು. ಹೀಗಾಗಿ, ರನ್ಯಾ ರಾವ್ ಟ್ರಾವೆಲಿಂಗ್ ಹಿಸ್ಟ್ರಿ ಮೇಲೆ ಡಿಐಆರ್ ಅಧಿಕಾರಿಗಳು ಕಳೆದ ಆರು ಕಣ್ಣಿಟ್ಟಿದ್ದರು. ನಟಿ ರನ್ಯಾ ರಾವ್ ಒಂದೇ ದಿನಕ್ಕೆ ದುಬೈಗೆ ಹೋಗಿ ಬರುತ್ತಿದ್ದಳು. ಈ ಹಿನ್ನೆಲೆಯಲ್ಲಿ ನಟಿ ರನ್ಯಾ ರಾವ್ ಮೇಲೆ ದೆಹಲಿಯ ಡಿಆರ್ಐ ಅಧಿಕಾರಿಗಳು ನಿಗಾ ಇಟ್ಟಿದ್ದರು. ಹೀಗಾಗಿ, ನಟಿ ರನ್ಯಾ ರಾವ್ ಡಿಆರ್ಐ ಬಲೆಗೆ ಬಿದ್ದಿದ್ದಾಳೆ ಎಂಬ ಶಂಕೆ ವ್ಯಕ್ತವಾಗಿದೆ ಇನ್ನು, ಚಿನ್ನ ವ್ಯಾಪರಿಗಳ ದ್ವೇಷದಿಂದ ಮತ್ತು ಸಚಿವರೊಬ್ಬರು ದೆಹಲಿಯ ಅಧಿಕಾರಿಗಳಿಗೆ ನೀಡಿದ ಮಾಹಿತಿಯಿಂದ ರನ್ಯಾ ರಾವ್ ಡಿಆರ್ಐ ಅಧಿಕಾರಿಗಳ ಬಲೆಗೆ ಬಿದ್ದಿದ್ದಾಳೆ ಎಂಬ ಅನುಮಾನವೂ ಇದೆ.
0 Comments