Ticker

6/recent/ticker-posts

Ad Code

Responsive Advertisement

*ಕೋಟಿ ಕೋಟಿ ವಹಿವಾಟು ನಡೆಸುವ ಮೀನುಗಾರಿಕೆಗೆ ತಟ್ಟಿದ ತಾಪಮಾನದ ಬಿಸಿ: ಮೀನು ಸಿಗದೆ ಕಂಗಾಲಾದ ಮೊಗವೀರರು******


ರಾಜ್ಯ ಕರಾವಳಿಯಲ್ಲಿ ಬಿಸಿಗಾಳಿಯ ಜೊತೆ ಉಷ್ಣಾಂಶ ಏರಿಕೆಯಾಗಿ ವಾತಾವರಣ ಬೆಂಕಿ ಕೆಂಡದಂತಾಗಿದೆ. ಈ ನಡುವೆ ಸಮುದ್ರದಲ್ಲಿಯು ತಾಪಮಾನ ಹೆಚ್ಚಾಗಿ ಮತ್ಸ್ಯಕ್ಷಾಮ ಉಂಟಾಗಿದೆ. ಮನುಷ್ಯರಂತೆ ಮೀನುಗಳು ಸಹ ತಂಪಾದ ಸ್ಥಳ ಹುಡುಕಿಕೊಂಡು ಹೋದುದರ ಪರಿಣಾಮ ಸಾವಿರಾರು ಮೀನುಗಾರಿಕಾ ಬೋಟ್‌ಗಳು ಬಂದರಿನಲ್ಲೇ ಲಂಗರು ಹಾಕಿದೆ.ಕಡಲನಗರಿ ಮಂಗಳೂರಿನಲ್ಲಿ ಹೊರಗೆ ಕಾಲಿಟ್ಟರೆ ಬಿಸಿ ಬಿಸಿ ಕೆಂಡದ ವಾತಾವರಣದಲ್ಲಿರುವ ಅನುಭವವಾಗುತ್ತಿದೆ. ಬಿಸಿಗಾಳಿಯ ಜೊತೆ ತಾಪಮಾನ ಏರಿಕೆಯಾಗಿರುವ ಪರಿಣಾಮ ಜನರಿಗೆ ಈಗಿನ ತಾಪಮಾನ ಸಹಿಸಲು ಅಸಾಧ್ಯವಾಗಿದೆ. ಈ ನಡುವೆ ಸಾವಿರಾರು ಕೋಟಿ ವಹಿವಾಟು ನಡೆಸುವ ಮೀನುಗಾರಿಕೆಗೂ ತಾಪಮಾನದ ಬಿಸಿ ತಟ್ಟಿದೆ. ಸಮುದ್ರದಲ್ಲಿ ತಾಪಮಾನ ಏರಿಕೆ ಆಗಿರುವುದರಿಂದ ಮೀನುಗಳು ತಳ ಸೇರುತ್ತಿದ್ದು, ಮೀನುಗಾರರು ಪರದಾಡುವಂತಾಗಿದೆ.ಸಮುದ್ರದಲ್ಲಿ ಹೆಚ್ಚಾದ ತಾಪಮಾನದಿಂದ, ಹವಾಮಾನ ವೈಪರೀತ್ಯದಿಂದಾಗಿ ಮೀನುಗಳು ಮೀನುಗಾರರ ಬಲೆಗೆ ಬೀಳುತ್ತಿಲ್ಲ. ಪರಿಣಾಮ ಮೀನುಗಾರಿಕೆಗೆ ತೆರಳುತ್ತಿರುವ ಮೀನುಗಾರರು ಲಕ್ಷಾಂತರ ರೂ. ನಷ್ಟಕ್ಕೊಳಗಾಗುತ್ತಿದ್ದಾರೆ. ಮಂಗಳೂರು ಬಂದರಿನಲ್ಲಿ 1500ಕ್ಕೂ ಹೆಚ್ಚು ಆಳಸಮುದ್ರ ಮೀನುಗಾರಿಕಾ ಬೋಟ್‌ಗಳಿವೆ. ಮೇ ತಿಂಗಳ ಅಂತ್ಯದವರೆಗೆ ಈ ಬೋಟ್‌ಗಳು ನಿರಂತರವಾಗಿ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿರುತ್ತವೆ. ಆದರೆ ಇದೀಗ ಸಾವಿರಕ್ಕೂ ಅಧಿಕ ಬೋಟ್​​ಗಳು ಮೀನುಗಾರಿಕೆಗೆ ತೆರಳದೇ ಬಂದರಿನಲ್ಲೇ ಲಂಗರು ಹಾಕಿವೆ.
   ಯೋಗೇಶ್ ಶಿರೂರು

Post a Comment

0 Comments